ಹೊಳೆನರಸೀಪುರ : ಇತ್ತೀಚಿಗೆ ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೇ ಪತ್ನಿಯ ಬರ್ಬರಹತ್ಯೆಯಾಗಿರುವ ಘಟನೆ ತಾಲೂಕಿನ ಎಸ್. ಸಂಕನಹಳ್ಳಿ ಬಳಿಯ ಪ್ರದೇಶದಲ್ಲಿಂದು ನಡೆದಿದೆ. ಅಂಬಿಕಾ (28) ಕೊಲೆಯಾಗಿರುವ ಮಹಿಳೆ, ಪತಿ ಚಂದ್ರ ಮೌಳಿ ಎಂಬಾತನೇ ಈ ಕೃತ್ಯ ಎಸೆಗಿರುವ ದುರಾಳನಾಗಿದ್ದಾನೆ. ಹಾಸನದ ಜಾಕಿ ಫ್ಯಾಕ್ಟರಿಯಲ್ಲಿ ಟೈನಿಯಾಗಿ ಅಂಬಿಕಾ ಕೆಲಸ ಮಾಡುತ್ತಿದ್ದಳು. ಆದರೆ ಪತ್ನಿ ಮೇಲೆ ಚಂದ್ರ ಮೌಲ್ಯ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಅನೇಕ ಸಾರಿ ಜಗಳ ನಡೆದಿತ್ತು ಎನ್ನಲಾಗಿದೆ.
ಇದೇ ತಾಲೂಕಿನ ಅಲ್ಲಗೌಡನಹಳ್ಳಿ ಅಂಬಿಕಾ ಮತ್ತು ಚಂದ್ರ ಮೌಳಿ ಮದುವೆ ಕೆಲವು ವರ್ಷಗಳ ಹಿಂದೆ ನಡೆದಿತ್ತು. ಅನುಮಾನ ಪಿಶಾಚಿಯಾಗಿದ್ದ ಚಂದ್ರ ಮೌಳಿ ಆಗಾಗ ಜಗಳ ತೆಗೆಯುತ್ತಿದ್ದ. ನಿನ್ನೆ ಸಹ ಹಳ್ಳಿ ಮೈಸೂರಿನಲ್ಲಿ ರಾಜಿ ಸಂಧಾನ ನಡೆದಿತ್ತು. ನಿಂದು ಕೆಲಸಕ್ಕೆ ಹೋಗಿದ್ದ ಪತ್ನಿಯನ್ನು ಫೋನ್ ಮಾಡಿ ಕರೆಸಿಕೊಂಡು ಪತಿ ನಂತರ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ತಲೆಯ ಮೇಲೆ ಕಲ್ಲು ಎತ್ತು ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲಿಸಿದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
