ಸಾಧನೆಗೈದ ವ್ಯಕ್ತಿಗಳ ಪರಿಚಯ ಮಾಡುವ ವಾರಕ್ಕೊಂದು ವಿಶೇಷ ಸಂಚಿಕೆ
ಡಾ. ತಿಮ್ಮಣ್ಣ ಭೀಮರಾಯ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ಬೇವಿನಹಳ್ಳಿ ಗ್ರಾಮದವರು, ಪ್ರಸ್ತುತ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ನೆಲೆಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ತಾತ್ಕಾಲಿಕ ಸಂಗೀತ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡದ ಮೂಜಿಕ್ ನಲ್ಲಿ ತೃತೀಯ ರ್ಯಾಂಕ್ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿನಲ್ಲಿ ಎಂ. ಎ ಮ್ಯೂಸಿಕ್ ನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಪಡೆದದ್ದು ಅವರ ಹೆಗ್ಗಳಿಕೆ.
ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಪಿ.ಎಚ್. ಡಿ ಪಡೆದಿದ್ದಾರೆ. ಪಂಡಿತ ಪುಟ್ಟರಾಜ ಗವಾಯಿಗಳಾಯದಿಯಗಿ ಹಲವು ಖ್ಯಾತನಾಮರು
ಅವರ ಸಂಗೀತ ಗುರುಗಳು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಠುಮ್ರಿ , ತರನ, ಸುಗಮ ಸಂಗೀತ. ಜಾನಪದ ಸಂಗೀತ, ಸಂಗೀತ ಸಂಯೋಜನೆ ಅವರ ಆಸಕ್ತಿಯ
ಹವ್ಯಾಸಗಳು, ಡಾ.ತಿಮ್ಮಣ್ಣ ಭೀಮರಾಯ ಹಾರ್ಮೋನಿಯಂ, ಡೋಲು ತಾಶಗಳನ್ನು ಮತ್ತು ಜಾನಪದ ವಾದ್ಯಗಳಾದ ಕಣಿ.ದಿಮ್ಮಿ ನುಡಿಸಬಲ್ಲರು. ಎರಡು ವರ್ಷ ಬೇರೆ ಬೇರೆ ಶಾಲೆಗಳಲ್ಲಿ ಶಿಕ್ಷಕರಾಗಿ ಮತ್ತು 11 ವರ್ಷಗಳಿಂದ ಹಂಪಿ ವಿಶ್ವವಿದ್ಯಾಲಯ ದಲ್ಲಿ ಅಧ್ಯಾಪಕರಾಗಿ ಸಲ್ಲಿಸುತಿದ್ದಾರೆ. 20ಕ್ಕೂ ಹೆಚ್ಚು ಸಂಗೀತ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಮತ್ತು ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು
ನಡೆಸುವ ಸಂಗೀತ ಪರೀಕ್ಷೆಗಳಿಗೆ ಪರೀಕ್ಷರಾಗಿ ಸೇವೆ ಮಾಡಿದ್ದಾರೆ. ಐದು ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವರು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ನೂರ ನಲವತ್ತೆರಡಕ್ಕು ಹೆಚ್ಚು ಸಂಗೀತ ಕಾರ್ಯಕ್ರಮ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಕ್ರಮ ಸಾಧಿಸಿದ್ದಾರೆ, ಹಾಗೆಯೇ ಕರ್ನಾಟಕದ ಪ್ರತಿಷ್ಠಿತ ಹಂಪಿ ಉತ್ಸವ. ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಮುಂತಾದ ಹಲವು ಉತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮತ್ತು ಗೌರವ ವನ್ನು ಪಡೆದಿದ್ದು.
ಅವರಿಗೆ ಸ್ವರ ಸಾಮ್ರಾಟ. ಕನ್ನಡ ಕಲಾ ಚೇತನ ಸಂಗೀತ ರತ್ನ 2022. ಶ್ರೀ ಶುಭೋದಯ ಶ್ರೇಷ್ಠ ಸಂಗೀತ ರತ್ನ ರಾಷ್ಟ್ರ ಪ್ರಶಸ್ತಿ. ಗಾನ ಯೋಗಿ ಪಂಚಾಂಕ್ಷರಿ ಪ್ರಶಸ್ತಿ. ಪಂಡಿತ ಪುಟ್ಟರಾಜ ಗವಾಯಿಗಳ ರಾಷ್ಟ್ರೀಯ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಸಂದಿವೆ ಸಂಗೀತದಲ್ಲಿ ಅಪೂರ್ವ ಸಾಧನೆ ಮಾಡಿರುವ ಡಾ “ತಿಮ್ಮಣ್ಣ ಭೀಮರಾಯ ಅವರಿಗೆ ತಮ್ಮ ವ್ಯಕ್ತಿ ಮತ್ತು ಪ್ರವೃತ್ತಿ ಈ ಇವೆರಡರಲ್ಲೂ ಹೆಚ್ಚಿನ ಏಳಿಗೆ ಆಗಲಿ ಎಂದು ತಮ್ಮೆಲ್ಲರ ಶುಭ ಹಾರೈಕೆಗಳು,


