ಹೂವಿನ ಹಡಗಲಿ : ಕರ್ನಾಟಕ ರಾಜ್ಯ ಬರಹಗಾರರ ಸಂಘವು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪನೆಯಾಗಿದ್ದು ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ರಾಜ್ಯದ ಎರಡನೇ ಕನ್ನಡ ಸಾಹಿತ್ಯ ಪರಿಷತ್ತಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ.
ಇತ್ತೀಚಿಗೆ ಶ್ರೀ ರವೀಂದ್ರ ಬಿ ಇವರು ಕ್ರಿಯಾಶೀಲ ಶಿಕ್ಷಕರು. ಸಾಹಿತಿಗಳು ಮತ್ತು ಸಂಘಟಕರು ಆದ ಕಾರಣ ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ)ಹೂವಿನ ಹಡಗಲಿ ವತಿಯಿಂದ ಕೊಟ್ಟೂರು ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಅಯ್ಕೆ ಮಾಡಲಾಗಿದೆ ಹಾಗೂ ಶ್ರೀ ಧರ್ಮಣ್ಣ ಹೆಚ್ ದನ್ನಿ ಕಲಬುರಗಿ ಅವರನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ ದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷರಾದ ಶ್ರೀ ಮಧುನಾಯ್ಕ.ಲಂಬಾಣಿ ತಿಳಿಸಿದ್ದಾರೆ,
