G20 ಗೆ ಅಗತ್ಯ ಬಿಗಿ ಭದ್ರತೆ ವಿಜಯ ನಗರ ಎಸ್ಪಿ ಶ್ರೀಹರಿಬಾಬು

Loading

ಹೊಸಪೇಟೆ : ಹಂಪಿಯಲ್ಲಿ ಜಿ-20 ಭದ್ರತೆಗೆ ಅಗತ್ಯ ಸಿಬ್ಬಂದಿಗಳು ಸೇರಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರಿ ವಾಹನಗಳನ್ನು ಮಾರ್ಗ ಬದಲಾವಣೆ ಮಾಡುವಂತೆ ಆರ್‌ಟಿಓ ಅಧಿಕಾರಿಗಳಿಗೆ ತಿಳಿಸಲಾಗಿದೆ, ಕಮಲಾಪುರ ಮತ್ತು ಕಡ್ದಿರಾಂಪುರ ದಲ್ಲಿನ ಎರಡು ಬಾರ್‌ಗಳನ್ನು ಜೂನ್ 9 ರಿಂದ 16ದವರೆಗೆ ಬಂದ್ ಮಾಡಲು ಆದೇಶಿಸಲಾಗಿದೆ, 3 ಎ ಎನ್ ಎಫ್ ತಂಡಗಳು ಆಗಮಿಸಿದ್ದು, ಅರಣ್ಯ ಇಲಾಖೆಯೊಂದಿಗೆ ನದಿ ಮತ್ತು ಅರಣ್ಯ ಪ್ರದೇಶದಲ್ಲಿ ಕೊಂಬಿಂಗ್ ನಡೆಸಲಿದೆ ಎಂದು ಹೇಳಿದರು. ಡ್ರೋನ್ ಕ್ಯಾಮೆರಾಗಳ ಹಾರಾಟ ನಿಷೇಧಿಸಿದ್ದು, ಅನುಮತಿ ಪಡೆದಲ್ಲಿ ಅವಕಾಶ ನೀಡಲಿದ್ದು, ನಿಯಮ ಮೀರಿದಲ್ಲಿ ಪ್ರಕರಣ ದಾಖಲಿಸಲಾಗುವುದು.. ರಸ್ತೆಗಳಲ್ಲಿ ಚೆಕ್‌ ಪೋಸ್ಟ್‌ ನಿರ್ಮಿಸಲಿದ್ದು,ಸಾರ್ವಜನಿಕರು ಪೊಲೀಸರಿಗೆ ಸಹಕರಿಬೇಕು ಎಂದ ತಿಳಿಸಿದರು.

Leave a Reply

Your email address will not be published. Required fields are marked *