ವಿಜಯನಗರ ಶ್ರೀಕೃಷ್ಣದೇವರಾಯ ಪ್ರವಾಸಿಗರ ಸೇವಾ ಸಂಘ (ರಿ) ವತಿಯಿಂದ ಇಂದು ಸ್ವಚ್ಛತೆ ಕಾರ್ಯಕ್ರಮ ಮಾಡಲಾಯಿತು ಜಿ 20 ಪ್ರಯುಕ್ತ ಆಣೆಕಟ್ಟು( ಆನೆ ಸಾಲು )ಸ್ಥಳಕ್ಕೆ ತಲಾಪುವ ದಾರಿಯಾದ ಪಟ್ಟಣದೆಲ್ಲಮ್ಮನ ದೇವಸ್ಥಾನದ ಆವರಣ ಮುಂಭಾಗ ಪುಷ್ಕರಣಿಯನ್ನು ಸ್ವಚ್ಛತೆ ಮಾಡಲಾಯಿತು. “ನಮ್ಮ ಹಂಪಿ ನಮ್ಮ ಜವಾಬ್ದಾರಿ” ಎಂಬ ನನ್ನುಡಿಯನ್ನು ಈ ಮೂಲಕ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಯಕ್ಷ ಹಂಪಿ ಮತ್ತು ಗೌರವಾಧ್ಯಕ್ಷರು ಮುಕ್ತಿಯರ್ ಪಾಷಾ. ಹಾಗೂ ಸಂಘ ದ ಎಲ್ಲಾ ಪದಾಧಿಕಾರಿಗಳು ಸರ್ವ ಸದ್ಯಸರು ಭಾಗವಸಿದರು.





